ಚೆಲುವು

ಅದೋ!
ಅಲ್ಲಿಹುದು ಹೂವು
ಅಂತಿಂತಹ ಹೂವಲ್ಲವದು, ತಾವರೆ ಹೂವು.
ತನ್ನಂದದಿಂದೆಲ್ಲರ ಸೆಳೆವುದಿದು
ಸಹಸ್ರ ಪತ್ರದ ಸುರಮ್ಯ ಹೂವು.
ದೂರದಿಂದ ನೋಡಿದರೆ ಬಲು ರಮ್ಯ
ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು
ಬಳಿಗೆ ಹೋದರೆ ಮುಖವ ಮುಚ್ಚುವುದು!
ಅದರಂದ ಕಂಡು ಓಡೋಡಿ ಬರುವುದು
ದುಂಬಿಗಳ ಹಿಂಡು.
ಮಧು ರಸ ಹೀರುತ್ತಾ ಮೈ ಮರೆತಿದೆ ದುಂಬಿ
ಹೂ ಮೊಗವ ಮುಚ್ಚಿದರೂ ತಿಳಿಯದಾ ದುಂಬಿ.
ಅರೆ! ಏನಿದು ಉಸಿರು ಕಟ್ಟುತ್ತಿದೆ?
ಪ್ರಾಣ ಹೋದರೂ ಸರಿಯೇ ಹೂವಿನಾ ಮಡಿಲಿನಲಿ.
ಇಂತಹ ದುಂಬಿಗಳೆಷ್ಟೋ?!
ಹೂವಿಗಿದು ಆಟ ಚೆಲ್ಲಾಟ
ದುಂಬಿಗೆ ಪ್ರಾಣ ಸಂಕಟ
ಆದರೂ ಆಸೆ, ಚಪಲ!
ಇದರಲ್ಲಿ ಬಿದ್ದು ಸತ್ತ ದುಂಬಿಗಳೆಷ್ಟೋ?
ದೂರದಿಂದ ಚೆಲುವ ಕಂಡು
ಓಡಿ ಬಂದು ಕೈಲಿ ಹಿಡಿದರೆ,
ಥೂ ಎಂಥ ಕೊಳಕು
ಒಳಗೆಲ್ಲಾ ಬರಿಯ ಹುಳುಕು
ಇದಿರುವುದೋ ಕೊಚ್ಚೆಯಲಿ
ಛೇ, ನಾನೇಕೆ ಬಂದೆ ಈ ಹೂವ ನೋಡಿ.
ಇದರಿಂದ ದೂರಕ್ಕೆ ಹೋಗುವೆನು ಓಡಿ.
*****
೧೦-೦೪-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..
Next post ಚೆಲುವೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys